ಮಾನ್ವಿ : ಸ್ವಾಭಿಮಾನ ಸಮಾವೇಶದಲ್ಲಿ ಸಿಎಂ ಭಾಷಣ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಭದ್ರತಾ ಸಿಬ್ಬಂದಿ..

K 2 Kannada News
ಮಾನ್ವಿ : ಸ್ವಾಭಿಮಾನ ಸಮಾವೇಶದಲ್ಲಿ ಸಿಎಂ ಭಾಷಣ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಭದ್ರತಾ ಸಿಬ್ಬಂದಿ..
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಇತ್ತೀಚಿಗೆ ಮಾನ್ವಿ ಪಟ್ಟಣದಲ್ಲಿ ಜರುಗಿದ ಸ್ವಾಭಿಮಾನ ಬೃಹತ ಸಮಾವೇಶದಲ್ಲಿ ಸಿಎಂ ಭಾಷಣದ ವೇಳೆ ಭದ್ರತಾ ಸಿಬ್ಬಂದಿಯೋರ್ವ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ.

ಹೌದು ಮಾನ್ವಿ ಪಟ್ಟಣದ ಹೊರ ವಲಯದ ಮೈದಾನದಲ್ಲಿ ಮೂಡ ಹಗರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಿತ್ತು, ಈ ಒಂದು ಡ್ಯಾಮೇಜ್ ಕಂಟ್ರೋಲ್ ಗಾಗಿ ಮತ್ತು ಸಿಎಂ ಸಿದ್ದರಾಮಯ್ಯ ಪರ, ಹಿಂದುಳಿದ ವರ್ಗದವರು ಇದ್ದೇವೆ ಎಂದು ಶಕ್ತಿ ಪ್ರದರ್ಶನ ಮಾಡಲು, ಸ್ವಾಭಿಮಾನ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಇನ್ನು ಈ ಒಂದು ಸಮಾವೇಶದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು.

ಈ ಒಂದು ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಆಗಮಿಸುತ್ತಾರೆ. ಈ ವೇಳೆ ಭಾಷಣದ ಮಧ್ಯೆ ಮೂಢ ವಿಚಾರಕ್ಕೆ ಸಂಬಂಧಪಟ್ಟಂತೆ, ಬಿಜೆಪಿ, ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿ. ನನ್ನ ಹೆಂಡತಿ ರಾಜಕೀಯಮಾಡಿಲ್ಲ, ಹೊರಗೆ ಬಂದವಳಲ್ಲ, ಅಂತವರ ಹೆಸರು ಬೀದಿಗೆ ತಂದ್ಬಿಟ್ರಲ್ಲ, ನಾನೇನು ಅನ್ಯಾಯ ಮಾಡಿದ್ದೆ, ಇದನ್ನ ಒಪ್ಕೋಳ್ಳೋಕೆ ತಯಾರಾಗಿದ್ದೀರಾ ಎನ್ನುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕಣ್ಣಲ್ಲಿ ನೀರು ಹಾಕಿದ್ದಾರೆ, ಭಾಷಣ ಮುಗಿಯುವವರೆಗೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

WhatsApp Group Join Now
Telegram Group Join Now
Share This Article