ಕಲ್ಲೂರು : ಆಸ್ತಿ ವಿಚಾರಕ್ಕೆ ಸಂಬಂದಿಗಳಿಂದಲೇ ಬೆದರಿಕೆ : ಡೆತ್ ನೋಡಲು ಬರೆದಿಟ್ಟು ಆತ್ಮಹತ್ಯೆ

K 2 Kannada News
ಕಲ್ಲೂರು : ಆಸ್ತಿ ವಿಚಾರಕ್ಕೆ ಸಂಬಂದಿಗಳಿಂದಲೇ ಬೆದರಿಕೆ : ಡೆತ್ ನೋಡಲು ಬರೆದಿಟ್ಟು ಆತ್ಮಹತ್ಯೆ
WhatsApp Group Join Now
Telegram Group Join Now

K2kannadanews.in

 

Crime news ರಾಯಚೂರು : ಆಸ್ತಿ ವಿಚಾರಕ್ಕೆ ಸಂಬಂದಿಸಿದಂತೆ ಸಂಬಂದಿಗಳಿಂದ ಜೀವ ಬೆದರಿಕೆ ಹಿನ್ನಲೆ ಡೆತ್‌ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪಿತ್ರಾರ್ಜಿತ ಆಸ್ತುಗಾಗಿ ಕಲಹ ಉಂಟಾಗಿದೆ. ಈ ವೇಳೆ ಸಂಬಂದಿಗಳಾದ ಸೋದರತ್ತೆ ಕುಟುಂಬದವರು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಹುಲಿಗೇಪ್ಪ (20) ಮೃತ ಯುವಕ ಜಮೀನಿನಲ್ಲಿ‌ ಡೆತ್ ನೋಟ್ ಬರೆದಿಟ್ಟು, ವಿಷ ಸೇವೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟ್ ನಲ್ಲಿ ಅತ್ತೆ ಲಕ್ಷ್ಮೀದೇವಿ, ಅತ್ತೆ ಮಗಳು ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಉಲ್ಲೇಖಿಸಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮೀದೇವಿ ಹಾಗೂ ಆಕೆಯ ಮಕ್ಕಳೇ ಕಾರಣ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಘಟನೆ ಸಂಬಂದ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article