ವಿಧಾನ, ವಿಕಾಸ ಸೌಧದಲ್ಲಿಯೂ ಮುನಿರತ್ನ ರೇ*.. ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ..?

K 2 Kannada News
ವಿಧಾನ, ವಿಕಾಸ ಸೌಧದಲ್ಲಿಯೂ ಮುನಿರತ್ನ ರೇ*.. ಸಂತ್ರಸ್ತೆಯಿಂದ ಸ್ಫೋಟಕ ಹೇಳಿಕೆ..?
WhatsApp Group Join Now
Telegram Group Join Now

K2kannadanews.in

Munirthna case ನ್ಯೂಸ್ ಡೆಸ್ಕ್ : ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣದಲ್ಲಿ ಆರ್‌ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಇದರೆ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದರು. ಇನ್ನೂ ಇದೀಗ ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ಮಹಿಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಂತ್ರಸ್ತ ಮಹಿಳೆಯು ಪೊಲೀಸರ ಮುಂದೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಯೂ ನನ್ನ ಮೇಲೆ ಶಾಸಕರು ಅತ್ಯಾಚರವೆಸಗಿದ್ದಾರೆ ಎಂದು ವಿಚಾರಣೆ ವೇಳೆ ಮಹಿಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಮಹಿಳೆಯ ಈ ಹೇಳಿಕೆ ಇದೀಗ ರಾಜ್ಯದ ಜನತೆಯನ್ನೇ ಆಘಾತಕ್ಕೀಡುಮಾಡಿದೆ. ಶಾಸಕರ ವಿರುದ್ಧ ವಿರೋಧಿಗಳಿಗೆ ಏಡ್ಸ್‌ ಇಂಜೆಕ್ಟ್‌ ಮಾಡುವ ಆರೋಪದ ನಡುವೆ ಅತ್ಯಾಚಾರ ಆರೋಪವೂ ಕೇಳಿ ಬಂದಿರುವುದು ಬಿಜೆಪಿ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.

WhatsApp Group Join Now
Telegram Group Join Now
Share This Article