ಲೈಟಿಂಗ್ ಅಳವಡಿಕೆ ವೇಳೆ ವಿದ್ಯುತ್ ‌ಶಾಕ್ ಯುವಕ ಸಾವು..

K 2 Kannada News
ಲೈಟಿಂಗ್ ಅಳವಡಿಕೆ ವೇಳೆ ವಿದ್ಯುತ್ ‌ಶಾಕ್ ಯುವಕ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Crime News ಮಾನ್ವಿ : ತಾಯಮ್ಮ ದೇವಿ ದೇವಾಲಯಕ್ಕೆ (Temple) ಲೈಟಿಂಗ್ (lighting) ಅಳವಡಿಕೆ ಮಾಡುತ್ತಿದ್ದ ವೇಳೆ ವಿದ್ಯುತ್ ‌ಶಾಕ್ (electric shock) ಹೊಡೆದು ಯುವಕ ಮೃತಪಟ್ಟ ಘಟನೆ ಸಂಗಾಪುರ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ದೀಪಾಲಂಕಾರ ವೇಳೆ ಶಾಕ್ ಹೊಡೆದು ಕನಕ (28) ಮೃತಪಟ್ಟ ದುರ್ದೈವಿ. ಸಂಗಾಪುರ ಗ್ರಾಮದ ಅಧಿದೇವತೆ ತಾಯಮ್ಮ ದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕಡೆ ಶುಕ್ರವಾರ (Friday) ಅಂಗವಾಗಿ ವಿಶೇಷ ಪೂಜೆ ಆಯೋಜನೆ ಮಾಡಲಾಗಿತ್ತು.

ವಿಶೇಷ ಪೂಜೆ (pooj) ಹಿನ್ನೆಲೆ ದೇವಸ್ಥಾನಕ್ಕೆ ಲೈಟಿಂಗ್ ಅಳವಡಿಕೆ ನಡೆದಿತ್ತು ಈ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಆಗಮಿಸಿದ ಮಾನ್ವಿ ಪೊಲೀಸ್ (Manvi police) ಠಾಣೆ ಪೊಲೀಸರು, ಮಾಹಿತಿ ಪಡೆದು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಆಸ್ಪತ್ರೆಗೆ (Hospital) ಶವ ರವಾನೆ ಮಾಡಿದ್ದಾರೆ.

 

WhatsApp Group Join Now
Telegram Group Join Now
Share This Article