ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜಾತಿಥ್ಯ : ಜೈಲಿನಿಂದ್ಲೆ ವಿಡಿಯೋ ಕಾಲ್..

K 2 Kannada News
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜಾತಿಥ್ಯ : ಜೈಲಿನಿಂದ್ಲೆ ವಿಡಿಯೋ ಕಾಲ್..
WhatsApp Group Join Now
Telegram Group Join Now

K2kannadanews.in

Renukaswamy murder case ಬೆಂಗಳೂರು : ‌ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್​​ಗಳೊಂದಿಗೆ ಬಿಂದಾಸ್ ಆಗಿರುವ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಆದ್ರೆ ಇದೀಗ ವಿಡಿಯೋ ಕಾಲ್​​ ಮಾಡಿರುವ ವಿಡಿಯೋ ಸಹ ರಿವೀಲ್​ ಆಗಿದ್ದು ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯಾ ಅನ್ನೋ ಪ್ರಶ್ನೆಗಳು ಮತ್ತಷ್ಟು ದಟ್ಟವಾಗಿದೆ.

ಹೌದು ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡಿದ್ದ ರೌಡಿಶೀಟರ್​ಗಳ ಜೊತೆ ಆರಾಮಾಗಿ ಚೇರ್​​ ಮೇಲೆ ಕುಳಿತು ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇದೀಗ ಮತ್ತೆ ದರ್ಶನ್​​ ತನ್ನ ವಿಐಪಿ ಸೆಲ್​​​ನಿಂದಲೇ ತಮ್ಮ ಆಪ್ತರಿಗೆ ವಿಡಿಯೋ ಕಾಲ್ ಮಾಡಿರುವುದು ಬಹಿರಂಗಗೊಂಡಿದೆ. ಜೈಲಿನಲ್ಲಿರುವ ದರ್ಶನ್​ ತನ್ನ ಆಪ್ತರಿಗೆ ಊಟಾ ಆಯ್ತಾ. ಇತ್ಯಾ ದಿನಚರಿಗಳ ಬಗ್ಗೆ ಸನ್ನೆ ಮೂಲಕ ಕೇಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ರೌಡಿಶೀಟರ್​​​ಗಳಾದ ಕುಳ್ಳ ಸೀನು, ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್​​ ಮ್ಯಾನೇಜರ್ ಹಾಗೂ ಕೊಲೆ ಆರೋಪಿಯೂ ಆದ ನಾಗರಾಜನೊಂದಿಗೆ ಬಿಂದಾಸ್ ಆಗಿ ಜೈಲಿನ ಬ್ಯಾರಕ್ ಹೊರಗೆ ಕುಂತಿದ್ದ ಫೋಟೋ ಲೀಕ್ ಆಗಿ ಚರ್ಚೆ ಮತ್ತು ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿಡಿಯೋ ಕೂಡ ವೈರಲ್ ಆಗಿದೆ.

WhatsApp Group Join Now
Telegram Group Join Now
Share This Article