ಸಿಂಧನೂರು : ಅಂತ್ಯಕ್ರಿಯೆ ಮುಗಿಸಿ ಸ್ನಾನಕ್ಕೆಂದು ಹಳ್ಳಕ್ಕೆ ಇಳಿದವ ನೀರುಪಾಲು..

K 2 Kannada News
ಸಿಂಧನೂರು : ಅಂತ್ಯಕ್ರಿಯೆ ಮುಗಿಸಿ ಸ್ನಾನಕ್ಕೆಂದು ಹಳ್ಳಕ್ಕೆ ಇಳಿದವ ನೀರುಪಾಲು..
WhatsApp Group Join Now
Telegram Group Join Now

K2kannadanews.in

ಸಿಂಧನೂರು : ಅಂತ್ಯಕ್ರಿಯೆ (funeral) ಮುಗಿಸಿದ ನಂತರ ಸ್ನಾನಕ್ಕೆಂದು(bath) ಹಳ್ಳಕ್ಕೆ ಇಳಿದ ವ್ಯಕ್ತಿ (Man) ನೀರಿನಲ್ಲಿ ಕೊಚ್ಚಿಹೋದ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರಿನ (Sindhanur) ಪಿಡಬ್ಲೂಡಿ ಕ್ಯಾಂಪ್ (PWD camp) ಬಳಿ ಇರುವ ತಾಲೂಕಿನ ಹಿರೇಹಳ್ಳದಲ್ಲಿ ಘಟನೆ ಬುಧವಾರ ಜರುಗಿದೆ. ಗಿಣಿವಾರ ಗ್ರಾಮದ ಸಾಯಿಬಣ್ಣ (50) ಕೊಚ್ಚಿ ಹೋದ ದುರ್ದೈವಿ. ತುಂಗಭದ್ರಾ (Tungabhadra) ನದಿಯ ನೀರು ಹಿರೇಹಳ್ಳದ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಹರಿವು ಹೆಚ್ಚಿತ್ತು. ಇದೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗುತ್ತಿದೆ.

ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡು ನಂತರ ಸ್ನಾನಕ್ಕೆಂದು ನದಿಗೆ ಹೋದ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ (Thahsildar) ಅರುಣ್ ಕುಮಾರ್ ದೇಸಾಯಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವ್ಯಕ್ತಿಯ ಪತ್ತೆಗಾಗಿ ಅಗ್ನಶಾಮಕ ಠಾಣೆ ಸಿಬ್ಬಂದಿ ಸ್ಥಳಿಯ ನುರಿತ ಈಜುಗಾರರು, ಸೇರಿ ಹರಿಗೋಲು ಇಳಿಸಿ ಶೋಧ ಕಾರ್ಯ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article