ರಾಯಚೂರು : ಅಸಭ್ಯ ಮೆಸೆಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಧರ್ಮದೇಟು..

K 2 Kannada News
ರಾಯಚೂರು : ಅಸಭ್ಯ ಮೆಸೆಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಧರ್ಮದೇಟು..
WhatsApp Group Join Now
Telegram Group Join Now

K2kannadanews.in

Rude messages ರಾಯಚೂರು : ಶಿಕ್ಷಕಿಗೆ (Teacher) ಆಸಭ್ಯ ಮೆಸೆಜ್ (message) ಮೂಲಕ ಕಿರುಕುಳ (Abused) ನೀಡಿ ಮಂಚಕ್ಕೆ ಕರೆದ ವಿಚಾರಕ್ಕೆ ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ ಧರ್ಮದೇಟು ತಿಂದಿರುವ ಘಟನೆ ಸೋಮವಾರ ಯರಮರಸ್ (Yaramars)ನಲ್ಲಿ ನಡೆದಿದೆ.

ರಾಯಚೂರು (Raichur) ನಗರದ ಹೊರವಲಯದ ಯರಮರಸ್ ಬಳಿಯ ಆದರ್ಶ ವಿದ್ಯಾಲಯ ಶಾಲೆಯಲ್ಲಿ (Adarsha vidhyalaya school) ಘಟನೆ ನಡೆದಿದೆ. ಅದೇ ಶಾಲೆಯಲ್ಲಿ ಅತಿಥಿ (Guest) ಶಿಕ್ಷಕಿಯಾಗಿದ್ದವರ ಮೊಬೈಲ್‌ಗೆ (Mobile) ಅಶ್ಲೀಲ, ಅಸಭ್ಯ ಮೆಸೇಜ್‌ಗಳನ್ನು ಕಳಿಸುತ್ತಿದ್ದ ಪ್ರಭಾರ ಪ್ರಾಚಾರ್ಯ ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ. ಇದರಿಂದ ಅಥಿತಿ ಶಿಕ್ಷಕಿ ಸಂಬಂಧಿಕರಿಗೆ (Relations) ಮಾಹಿತಿ ನೀಡಿ ಬೇಸರಗೊಂಡಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಬಂಧುಗಳು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಚೆನ್ನಾಗಿ ಥಳಿಸಿ (Beating), ಬಟ್ಟೆ ಹರಿದು ಧರ್ಮದೇಟು ಕೊಟ್ಟಿದ್ದಾರೆ.

ಇದರಿಂದ ಎಚ್ಚೆತ್ತ ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ, ತಾನು ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಹಾಗೂ ಶಿಕ್ಷಕಿಯ ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಕ್ಷಮೆಯಾಚಿಸಿದ್ದರಿಂದ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article