AP : ಕಾಪಾಡಮ್ಮ ಅಂತ ಭಕ್ತಿಯಿಂದ ಕೈ ಮುಗಿದ : ದೇವಿ ವಿಗ್ರಹದ ಚಿನ್ನವನ್ನೇ ಎಗರಿಸಿದ್ದ..

K 2 Kannada News
AP : ಕಾಪಾಡಮ್ಮ ಅಂತ ಭಕ್ತಿಯಿಂದ ಕೈ ಮುಗಿದ : ದೇವಿ ವಿಗ್ರಹದ ಚಿನ್ನವನ್ನೇ ಎಗರಿಸಿದ್ದ..
WhatsApp Group Join Now
Telegram Group Join Now

K2kannadanews.in

Theft in temple ಆಂಧ್ರ ಪ್ರದೇಶ : ಕಳ್ಳತನ ಮಾಡುವ ಕಳ್ಳರು ದೇವಾಲಯದಲ್ಲಿ ಕಳುವು ಮಾಡುವಾಗ ಮಾತ್ರ ಸಾಕಷ್ಟು ವಿಶಿಷ್ಟ ಮತ್ತು ವಿಚಿತ್ರವಾಗಿ ಕಳ್ಳತನ ಮಾಡುತ್ತಾರೆ. ಅಂತದ್ದೆ ಒಂದು ಕಳ್ಳತನ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಮದನಹಳ್ಳಿ ಪಟ್ಟಣದ ಬಾಟಗಂಗಮ್ಮ ದೇವಾಲಯದಲ್ಲಿ ನಡೆದಿದ್ದು, ತೆಲುಗು ಸ್ಕ್ರೈಬ್ ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. ಕಳ್ಳೊಬ್ಬ ದೇವಾಲಯಕ್ಕೆ ಬಂದು ಅಮ್ಮಾ ನೀನೇ ನನ್ನನ್ನು ಕಾಪಾಡ್ಬೇಕು ಎಂದು ಭಕ್ತಿಯಿಂದ ಕೈ ಮುಗಿದು ದೇವಿ ವಿಗ್ರಹದ ಚಿನ್ನವನ್ನೇ ಎಗರಿಸಿದ್ದಾನೆ.

 

ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.  ದೇವಸ್ಥಾನಕ್ಕೆ ಬಂದ ಕಳ್ಳ, ಯಾರಿಗೂ ಅನುಮಾನ ಬಾರದಂತೆ ಸಾಮಾನ್ಯ ಭಕ್ತರಂತೆ ಗರ್ಭಗುಡಿಯ ಒಳಗೆ ಬಂದು, ಅಮ್ಮಾ ನೀನೇ ಕಾಪಾಡು ಎಂದು ದೇವರಿಗೆ ಕೈ ಮುಗಿದು, ಆಕಡೆ ಈಕಡೆ ನೋಡುತ್ತಲೆ, ದೇವರ ವಿಗ್ರಹದ ಮೇಲಿದ್ದ ಚಿನ್ನದ ಸರವನ್ನೇ ಎಗರಿಸಿದ್ದಾನೆ. ಈ ವೀಡಿಯೋ ನೋಡಿದ ನೆಟ್ಟಿಗರು, ಅಯ್ಯಯ್ಯೋ ಇದೆಂಥಾ ಅವಸ್ಥೆ ಎಂದು ಕಾಮೆಂಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article