ಪ್ರತಿ ದಿನ ನಡೆದು ಹೊಗುತ್ತಿದ್ದ ಬಾಲಕ : ಲಿಫ್ಟ್ ಕೇಳಿ ಮಸಣ ಸೇರಿದ..

K 2 Kannada News
ಪ್ರತಿ ದಿನ ನಡೆದು ಹೊಗುತ್ತಿದ್ದ ಬಾಲಕ : ಲಿಫ್ಟ್ ಕೇಳಿ ಮಸಣ ಸೇರಿದ..
WhatsApp Group Join Now
Telegram Group Join Now

K2kannadanews.in

Accident News ತೆಲಂಗಾಣ : ಅತಿ ವೇಗವಾಗಿ (Speed) ಬಂದ ಬೈಕ್ (Bike) ರಸ್ತೆ ಬದೆ ನಿಂತಿದ್ದ ಟ್ರಕ್ಕಿಗೆ (Truck) ಡಿಕ್ಕಿ ಹೊಡೆದು ಇಬ್ಬರು ಯುವಕರು (youth) ಹಾಗೂ ಓರ್ವ ಬಾಲಕ (Boy) ಸ್ಥಳದಲ್ಲೇ ಮೃತಪಟ್ಟ (Died) ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ (CC camera) ಸೆರೆಯಾಗಿದೆ.

ತೆಲಂಗಾಣದ (Telangan) ಸಾತುಪಲ್ಲಿಯಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. Rtv ವಾಹಿನಿ ವರದಿಗಳ ಪ್ರಕಾರ ಮೃತರನ್ನು ಶೇಕ್ ಕರಿಮುಲ್ಲಾ (12), ಮದ್ದಿನ ವೇಣು (20) ಮತ್ತು ಬೇತಿ ಸುರೇಶ್ (22) ಎಂದು ಗುರುತಿಸಲಾಗಿದೆ. ಗಂಗಾರಾಮ್ ನಲ್ಲಿರುವ ಶಾಲೆಯಲ್ಲಿನ 6 ನೇ ತರಗತಿಯ ವಿದ್ಯಾರ್ಥಿ ಶೇಕ್ ಕರಿಮುಲ್ಲಾ ಪ್ರತಿದಿನ ಕಾಲ್ನಡಿಗೆಯಲ್ಲಿ ತನ್ನ ಮನೆಗೆ ಹೋಗುತ್ತಿದ್ದ.

ಆದರೆ ಅಪಘಾತದ ದಿನ ಮನೆಗೆ ಹಿಂದಿರುಗುವಾಗ ಬೈಕ್‌ ಗೆ ಲಿಫ್ಟ್ ಕೇಳಿದ್ದು, ದ್ವಿಚಕ್ರ ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. ದುರಂತವೆಂದರೆ ವಿದ್ಯಾರ್ಥಿ ಲಿಫ್ಟ್ ಕೇಳಿದ ಸ್ಥಳದಿಂದ ಆತನ ಮನೆ ಕೇವಲ 10 ನಿಮಿಷ ಪ್ರಯಾಣದ ಅಂತರದಲ್ಲಿತ್ತು ಎಂದು ಹೇಳಲಾಗುತ್ತಿದೆ. ಈ ಒಂದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

WhatsApp Group Join Now
Telegram Group Join Now
Share This Article