K2kannadanews.in
Crocodile, ಸಿಂಧನೂರು : ಮಳೆ ಕೊರೆತೆ (Lack of rain) ಹಿನ್ನಲೆ ನದಿಗಳಲ್ಲಿ (river) ನೀರಿಲ್ಲದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ, ನದಿ ಪಾತ್ರದ ಮೊಸಳೆಗಳು ಇದೀಗ ಆಹಾರ (Food) ಅರಸಿ ಗ್ರಾಮಗಳ (Villege) ಲಗ್ಗೆ ಇಡುತ್ತಿವೆ. ತುಂಗಭದ್ರ ನದಿ ಬಳಿ ಇರುವ ಕೆ.ಬಸಾಪುರ ಗ್ರಾಮದ ರೈತರ ಜಮೀನಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯೇಕವಾಗಿ ಆತಂಕ ಹುಟ್ಟಿಸಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಕೆ.ಬಸಾಪುರ ಗ್ರಾಮದಲ್ಲಿನ ಕೆರೆಗಳ (Lake) ಪಕ್ಕದಲ್ಲಿ ಹಲವು ದಿನಗಳಿಂದ ಮೊಸಳೆ (Crocodile) ಓಡಾಡುತ್ತಿದ್ದು, ನೋಡಿದ ಸಾರ್ವಜನಿಕರು ತಮ್ಮ ದನ, ಕುರಿ (Sheep), ಮೆಕೆಗಳಿಗೆ ಜಮೀನಿಗೆ ಕರೆದೊಯ್ಯಲು ಭಯ ಉಂಟಾಗಿತ್ತು.
ಈ ಬಗ್ಗೆ ಗ್ರಾಮದ ಪಂಚಯತಿ ಅಧಿಕಾರಿ, ಪಿಡಿಒ (PDO)ಗಳ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು (Forest offer) ಗ್ರಾಮಸ್ಥರ ಸಹಾಯದೊಂದಿಗೆ ಮೊಸಳೆಯನ್ನು ಸೆರೆ ಹಿಡಿದಿದು, ಸಾಲಗುಂದಾ ಗ್ರಾಮದ ಬಳಿ ತುಂಗಭದ್ರಾ ನದಿಗೆ ಬಿಡಲಾಗಿದೆ. ಮೊಸಳೆ ಹಿಡಿದ ಮಾಹಿತಿ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
[ays_poll id=3]