K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ

ಬೆಳಗಿನ ಮಾಡಿದ್ದ ಉಪಹಾರದಲ್ಲಿ (Brack fast) ಹಲ್ಲಿ (lizard) ಬಿದ್ದ ಪಲಾವ್ (Palav) ತಿಂದು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಅಸ್ವಸ್ಥ ಗೊಂಡ ಘಟನೆ ರಾಯಚೂರು (Raichur) ನಗರದ ಚಂದ್ರಬಂಡ ರಸ್ತೆಯಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ (School) ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಿಮ್ಸ್ (Rims)ಆಸ್ಪತ್ರೆಗೆ ಜಿಲ್ಲಾಧಿಕಾರಿ (DC), ಸಿಇಓ(CEO), ಎಸ್ ಪಿ (SP) ಮತ್ತು ಡಿ ಎಚ್ ಓ (DHO) ಅವರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಕುರುಹಿನ ಶೆಟ್ಟಿ ಸಮಾಜ ಪ್ರವರ್ಗ 2 ಎ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ, ಸಮಾಜದ ಅಧ್ಯಕ್ಷರಿಂದ ಈ ಒಂದು ಪತ್ರಿಕಾಗೋಷ್ಠಿ ಮಾಡುವ ಮುಖಾಂತರ, ತಹಶೀಲ್ದಾರ್ ಮತ್ತು ನಾಡ ಕಚೇರಿಗಳಲ್ಲಿ, ಕರುಹಿನ ಶೆಟ್ಟಿ ಸಮಾಜದವರಿಗೆ ಪ್ರವರ್ಗ 2 ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಿದರು. ಇನ್ನು ಈ ಒಂದು ಪ್ರಮಾಣ ಪತ್ರ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದರಿಂದ ಸಮಾಜ ಶೈಕ್ಷಣಿಕವಾಗಿ ಹಿಂದೆ ಉಳಿಯುತ್ತಿದೆ ಎಂದು ಹೇಳಿದರು.

ಎಸ್ ಎಸ್ ಹೆಚ್ ಸಾಂಸ್ಕೃತಿಕ ಕಲಾ ಪ್ರಕಾಶನ ಸಂಘದಿಂದ ನ್ಯಾಯವಾದಿ ಮಲ್ಲಣ್ಣ ಶಿವರಾಯ ಗೌಡ ರಚಿತಾ ಜನಪದ ಜ್ಞಾನಪೀಠ ಪುಸ್ತಕ ಲೋಕಾರ್ಪಣೆ ಮತ್ತು ಸಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಪಂಡಿತ್ ಸಿದ್ದರಾಮಯ್ಯ ಮಾಡಲಾಗಿದೆ ಎಂದು ಹೇಳಿದರು.

ರಾಯಚೂರು ನಗರದ ಬಿಜನಗೆರಾ ರಸ್ತೆಯಲ್ಲಿ ಇರುವ, ಡಾ. ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ, ಇರುವ ಸಮಸ್ಯೆಗಳಾದ, ನೀರಿನ ಸಮಸ್ಯೆ, ಸ್ವಚ್ಛತೆ ಲೈಬ್ರರಿ ಮತ್ತು ಕಂಪ್ಯೂಟರ್ಗಳನ್ನ ನೀಡುವ ಮೂಲಕ ಇಲ್ಲಿನ ಸಮಸ್ಯೆಗಳನ್ನು, ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ, ವಿದ್ಯಾರ್ಥಿಗಳು ಅಡುಗೆ ಪಾತ್ರೆಗಳನ್ನ ವಸತಿ ನಿಲಯ ಮುಂದೆ ಪ್ರತಿಭಟನೆ ಮಾಡಿದರು.

WhatsApp Group Join Now
Telegram Group Join Now
Share This Article