ಬಸನಗೌಡ ದದ್ದಲ್ ಬೆಂಗಳೂರಿಗೆ ಹೊರಟಿದ್ರು ಮಂತ್ರಾಲಯ ವರೆಗೂ ನಮ್ಮ ಕಾರಲ್ಲಿ ಬಂದ್ರು..?

K 2 Kannada News
ಬಸನಗೌಡ ದದ್ದಲ್ ಬೆಂಗಳೂರಿಗೆ ಹೊರಟಿದ್ರು ಮಂತ್ರಾಲಯ ವರೆಗೂ ನಮ್ಮ ಕಾರಲ್ಲಿ ಬಂದ್ರು..?
WhatsApp Group Join Now
Telegram Group Join Now

K2kannadanews.in

Rural MLA daddal ರಾಯಚೂರು : ನಾವು ಮಂತ್ರಾಲಯಕ್ಕೆ (Mantralya) ಹೋಗುವಾಗ, ಬೇಕರಿ (Bakery) ಬಳಿ ನಿಂತಿದ್ದೆವು, ಅಚಾನಕ್ಕಾಗಿ (unfortunate) ಶಾಸಕರು (MLA) ಅಲ್ಲಿಗೆ ಬಂದ್ರು ನಾವು ಮಂತ್ರಾಲಯಕ್ಕೆ ಹೋಗ್ತಿದೀವಿ ಅಂದಾಗ, ನಾನು ಬೆಂಗಳೂರಿಗೆ (Benglore) ಹೋಗ್ತಾ ಇದ್ದೀನಿ ನಿಮ್ಮ ಕಾರಲ್ಲಿ (car) ಅಲ್ಲಿವರೆಗೂ ಬರ್ತೀನಿ ಅಂತ ಬಂದು ಕುತ್ಕೊಂಡ್ರು. ಹೀಗಂತ ಶಾಸಕರನ್ನ ಬೆಳಬೆಳಗ್ಗೆ ಕರೆದುಕೊಂಡು ಹೋದ ಶಿವಪ್ಪ ನಾಯಕ ಹೇಳಿದ್ದು.

ಹೌದು ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ಹಗರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಗರಣಕ್ಕೆ ಸಂಬಂಧಪಟ್ಟಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಬಂದನ ಭೀತಿಯಲ್ಲಿದ್ದಾರೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿರುವ ಶಾಸಕರು ನಿನ್ನೆ ಸಂಜೆ ರಾಯಚೂರಿನಲ್ಲಿ ಪ್ರತ್ಯಕ್ಷರಾಗಿದ್ದರು. ಆದರೇ ಬೆಳಿಗ್ಗೆ ಯಾರನ್ನೂ ಭೇಟಿಯಾಗದೆ ಮನೆಯಿಂದ ಅವಸರಲ್ಲಿ ಕಾರು ಹತ್ತಿ ಪ್ರಯಾಣ ಮಾಡಿದ್ದಾರೆ. ಹೀಗೆ ಇಲ್ಲಿಂದ ಹೋದವರು ರಸ್ತೆ ಮಧ್ಯ ಕಾರ್ಯಕರ್ತರನ್ನ ಭೇಟಿಯಾಗಿ ಮಂತ್ರಾಲಯದಿಂದ ಮತ್ತೊಂದು ಕಾರ್ ನಲ್ಲಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಶಾಸಕರ ಆಪ್ತ ಆಪ್ತರಾದ ಶಿವಪ್ಪ ನಾಯಕ ಹೇಳಿದರು.

WhatsApp Group Join Now
Telegram Group Join Now
Share This Article