187 ಕೋಟಿ ಹಗರಣ : ಬಸನಗೌಡ ದದ್ದಲ್ ಹೆಸರು ತಳುಕು..

K 2 Kannada News
187 ಕೋಟಿ ಹಗರಣ : ಬಸನಗೌಡ ದದ್ದಲ್ ಹೆಸರು ತಳುಕು..
Oplus_0
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಮಹರ್ಷಿ ವಾಲ್ಮೀಕಿ (mahrshi valmiki) ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಭ್ರಷ್ಟಾಚಾರ (Corruption) ಪ್ರಕರಣದಲ್ಲಿ, ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ (president) ಬಸನಗೌಡ ದದ್ದಲ್ ಹೆಸರು ಮುನ್ನೆಲೆಗೆ ಬಂದಿದೆ.

ಹೌದು ಸಚಿವ (minister) ನಾಗೇಂದ್ರ ಬೆನ್ನಲ್ಲೇ ಶಾಸಕ (MLA) ಬಸನಗೌಡ ದದ್ದಲ್ ಗೂ ಸಂಕಷ್ಟ ಎದುರಾಗಿದೆ. ರಾಯಚೂರು ಗ್ರಾಮೀಣ (Raichur rural) ಕ್ಷೇತ್ರದ ಹಾಲಿ ಶಾಸಕ ಬಸನಗೌಡ ದದ್ದಲ್ ಅವರು, ಆರೋಪಿ (accused) ನಂ 8 ರ ಜೊತೆ ವಾಟ್ಸಪ್ ಚಾಟಿಂಗ್ (what’s app chatting) ಮಾಡಿದ್ದಾರೆ. ಅದೂ ಕೂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಳಿಕ ಈ ಒಂದು ವಾಟ್ಸಪ್ ಚಾಟಿಂಗ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯಕ್ಕೆ (Court) ಸಲ್ಲಿಸಿದ 3 ಪುಟಗಳ ಹೇಳಿಕೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆರೋಪಿ ನಂ 8 ಪರ ವಕೀಲ ಪರಶುರಾಮ ಸಲ್ಲಿಸಿರೋ ಹೇಳಿಕೆಯನ್ನು ತನಿಖೆಗಾಗಿ ನ್ಯಾಯಾಲಯಕ್ಕೆ ವಕೀಲ ಪರಶುರಾಮ ಕೋರಿಕೆ‌ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article