K2Kannadanews.in
Crime News ರಾಯಚೂರು : ಇತ್ತೀಚೆಗೆ ಒಂಟಿ ಮಹಿಳೆ ಸರಗಳ್ಳತನ ಮಾಡಿಕೊಂಡು ಪರಟರಿಯಾಗಿದ್ದ ಆರೋಪಿಯನ್ನು ಸಿಂಧನೂರು ಪೊಲೀಸರು ಕಾರ್ಯಚರಣೆ ಮಾಡುವ ಮೂಲಕ ಆರೋಪಿಯನ್ನು ಬಂದಿಸಿದ ಘಟನೆ ಸಿಂಧನೂರು ನಗರ ಠಾಣೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬಂಗಾರದ ಸರಗಳ್ಳತನ ಮತ್ತು ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಮಹಿಳೆ ಹೊಗುತ್ತಿದ್ದ ವೇಳೆ ಪ್ರಶಾಂತ ನಗರದಲ್ಲಿನ ಅಯ್ಯಂಗಾರ ಬೇಕರಿ ಮುಂದೆ ಆರೋಪಿ ಮಹಿಳೆಯ ಕೊರಳಲ್ಲಿ ಸುಮಾರು 2ಲಕ್ಷ ಬೆಲೆಬಾಳುವ, 31.87 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ, ಮಹಿಳೆ ಪ್ರಕರಣ ದಾಖಲಿಸುತ್ತಿದ್ದಂತೆ, ಎಚ್ಚೆತ್ತ ಪೋಲಿಸರು ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಹಾಗೂ ಅಪ್ರಾಪ್ತನನ್ನು ಹಿಡಿದು ಸರಗಳ್ಳತನ ಪ್ರಕರಣ ಭೆದಿಸಿದ್ದಾರೆ.
ಇದರೊಂದಿಗೆ ಸಿಂಧನೂರು ನಗರದಲ್ಲಿ ಕಳೆದ 06 ತಿಂಗಳಿಂದ ಕಳ್ಳತನವಾದ 20 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಗಾರ ಮತ್ತು ಬೈಕ್ಗಳ ಒಟ್ಟು ಮೌಲ್ಯ ರೂ 16.35.000/- ಜಪ್ತಿ ಮಾಡಿಕೊಂಡು ವಿವಿಧ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಬಂಗಾರದ ಸರಗಳ್ಳತನ ಮತ್ತು ಬೈಕ್ಗಳನ್ನು ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳಾದ, ಆರೀಪ್ (23), ಸಿದ್ದರಾಮಪ್ಪ(20), ಮತ್ತು ಅಪ್ರಾಪ್ತ ಬಾಲಕನನ್ನು ಬಂದಿಸಿ, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.