2.5ಲಕ್ಷ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಪ್ರಯಾಣಿಕ : ಹಣ ಮರಳಿಸಿದ ಚಾಲಕ ನಿರ್ವಾಹಕ..!

K 2 Kannada News
2.5ಲಕ್ಷ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಪ್ರಯಾಣಿಕ : ಹಣ ಮರಳಿಸಿದ ಚಾಲಕ ನಿರ್ವಾಹಕ..!
WhatsApp Group Join Now
Telegram Group Join Now

K2kannadanews.in

KSRTC ರಾಯಚೂರು : ಪ್ರಯಾಣಿಕನೊಬ್ಬ ಬಸ್ಸಿನಲ್ಲಿ (BUS) 2.5 ಲಕ್ಷ (Lak) ರೂ. ಹಣವನ್ನು (Money) ಬಿಟ್ಟುಹೊಗಿದ್ದ, ಇದನ್ನು ನೋಡಿದ ಕೆಎಸ್​ಆರ್​ಟಿಸಿ ನಿರ್ವಾಹಕ (Conductor) ಮತ್ತು ಚಾಲಕ (Driver) ಹಿಂದಿರುಗಿಸಿ ಮಾನವೀಯತೆ (Humanity) ಮೇರೆದಿರುವ ಘಟನೆ ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ (Bus stop) ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಮೂಲದ ಸೋಮಶೇಖರ್​ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ (Hubbli- Hyderabad) ಬಸ್​ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ಚಾಲಕ ಹನಮಂತ್​ (Hanumata) ಹಾಗೂ ಕಂಡಕ್ಟರ್ ಮಂಜುನಾಥ್ (Manjunata) ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನ (afternoon) ಮಾನ್ವಿಯಿಂದ ಇದೇ ಬಸ್​ನಲ್ಲಿ ರಾಯಚೂರಿಗೆ ಸೋಮಶೇಖರ್ ಆಗಮಿಸಿದ್ದರು. ಈ ವೇಳೆ 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್​ನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದಾರೆ.

ಬಳಿಕ ಹೈದರಾಬಾದ್​ನಲ್ಲಿ ಲಗೇಜ್ ಕ್ಯಾರಿಯರ್ನಲ್ಲಿ ಬ್ಯಾಗ್ (Bag) ಪರಿಶೀಲನೆ ವೇಳೆ ಹಣ ಪತ್ತೆ ಹಿನ್ನೆಲೆ ಬ್ಯಾಗ್​ನಲ್ಲಿದ್ದ ಬ್ಯಾಂಕ್ ಪಾಸ್​ಬುಕ್​ (Pass book) ತಪಾಸಣೆ ಮಾಡಲಾಗಿದೆ. ಆ ಬಳಿಕ ಅದರಲ್ಲಿದ್ದ ಫೋನ್ ನಂಬರ್ (phone number) ಮೂಲಕ ಸೋಮಶೇಖರ್​ಗೆ ಕರೆ ಮಾಡಲಾಗಿದೆ. ಇಂದು ಮರಳಿ ಹೈದರಾಬಾದ್​ನಿಂದ ಆಗಮಿಸುವ ವೇಳೆ ರಾಯಚೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್​ಗೆ ಹಸ್ತಾಂತರ ಮಾಡಲಾಗಿದೆ.

WhatsApp Group Join Now
Telegram Group Join Now
Share This Article